Ts ads

23 ಡಿಸೆಂಬರ್, 2023

ರಜತ ಮಹೋತ್ಸವಕ್ಕೆ ಭರ್ಜರಿ ತಯಾರಿ.

1989ರಲ್ಲಿ ಕೇವಲ ಹತ್ತು ಜನ ಸೇರಿ ಅಥಣಿ ತಾಲೂಕಿನ ಸಂಕೋನಟ್ಟಿ ಮತ್ತು  ನಂದಗಾಂವದಲ್ಲಿ ನಿರ್ಮಾಣ ಆದ ಸಂಸ್ಥೆ ವರ್ಧಮಾನ ಶಿಕ್ಷಣ ಸಂಸ್ಥೆಯು 35ವರ್ಷಗಳನ್ನು ಪೂರೈಸಿದ್ದಕ್ಕೆ. ಈ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ಸೇರಿ ಬರುವ ವರ್ಷ 2024 ಫೆಬ್ರವರಿ ತಿಂಗಳ 9, ರಿಂದ 11ವರೆಗೆ  ರಜತ  ಮಹೋತ್ಸವ ಕಾರ್ಯಕ್ರಮ ಆಯೋಜಿಸಿದ್ದು. ಇದರ ಪ್ರಯುಕ್ತ 1989 ರಿಂದ 2023ರ ವರೆಗೆ ಎಸ್ ಎಸ್ ಎಲ್ ಸಿ ಪಾಸಾಗಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳ ಇವತ್ತು ಶನಿವಾರ 12:00ಕ್ಕೆ ಸಂಕೋನಟ್ಟಿಯ ಹೈಸ್ಕೂಲ್ ಸಭಾಗೃಹದಲ್ಲಿ ಸಭೆ ಸೇರಿ ವಿವಿಧ ರೀತಿಯ ಚರ್ಚೆ ನಡೆಸಿದರು. 

ಈ  ಪೂರ್ವಭಾವಿ ಸಭೆಯಲ್ಲಿ  ಮುಖ್ಯೋಪಾಧ್ಯಾಯರಾದ ಲಡಗಿ   ಸರ್ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಅನಂತ್ ಬಸರಿಕೋಡಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ ಉಗಾರೆ ಈ ಪೂರ್ವಭಾವಿ  ಸಭೆಯಲ್ಲಿ ಉಪಸ್ಥಿತರಿದ್ದರು. ಇದರ ಜೊತೆಗೆ ಹಳೆಯ ವಿದ್ಯಾರ್ಥಿಗಳು ಮತ್ತು ಶಾಲೆಯ ಅಧ್ಯಾಪಕರು ಸೇರಿ ಮುಂಬರುವ ರಜತ ಮಹೋತ್ಸವ ಕಾರ್ಯಕ್ರಮವನ್ನು ಹೇಗೆ ಯಶಸ್ವಿಯಾಗಿ ಮಾಡಬೇಕು ಮುಖ್ಯೋಪಾಧ್ಯಾಯರಾದ ಲಡಗಿ ಸರ್   ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪೂರ್ವಭಾವಿ ಸಭೆಯಲ್ಲಿ   ಕಾರ್ಯಕ್ರಮ ಯಶಸ್ವಿಯಾಗಿಸಲು  ಚರ್ಚೆ ಮಾಡಿ ವಿವಿಧ ಆಯಾಮಗಳ ಬಗ್ಗೆ  ವಿಮರ್ಶೆ ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ 1989ರಿಂದ 2023ರ ವರೆಗೆ ವರ್ಧಮಾನ ಶಿಕ್ಷಣ  ಸಂಸ್ಥೆಯಲ್ಲಿ ಹತ್ತನೇ ತರಗತಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಸ್ಥೆಯ ಕಾರ್ಯದರ್ಶಿಯಾಗಿರುವ ಶ್ರೀ ಅನಂತ ಬಸರಿಕೋಡಿ ಅವರು ಪೂರ್ವಭಾವಿ ಸಭೆಯಲ್ಲಿ ನೆರೆದಿದ್ದ ಹಳೆಯ ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡರು. 





ಹಳೆಯ ವಿದ್ಯಾರ್ಥಿಗಳ ಸಂಪರ್ಕಕ್ಕಾಗಿ ಸಂಸ್ಥೆಯಲ್ಲಿ ಹತ್ತನೇ ತರಗತಿ ತೇರ್ಗಡೆಯಾಗಿ ಅದೇ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಪಾಟೀಲ್ ಸರ್ ಅವರು ಇದರ ನೇತೃತ್ವವನ್ನು ವಹಿಸಿರುತ್ತಾರೆ ಮತ್ತು ಹಳೆಯ ವಿದ್ಯಾರ್ಥಿಗಳು ಅವರನ್ನು ಸಂಪರ್ಕಿಸಿ ಬೇಕು ಅವರ ದೂರವಾಣಿ ಸಂಖ್ಯೆ : 8123104279.

1 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ