Ts ads

This is default featured post 1 title

Go to Blogger edit html and find these sentences.Now replace these sentences with your own descriptions.

This is default featured post 2 title

Go to Blogger edit html and find these sentences.Now replace these sentences with your own descriptions.

This is default featured post 3 title

Go to Blogger edit html and find these sentences.Now replace these sentences with your own descriptions.

This is default featured post 4 title

Go to Blogger edit html and find these sentences.Now replace these sentences with your own descriptions.

This is default featured post 5 title

Go to Blogger edit html and find these sentences.Now replace these sentences with your own descriptions.

27 ಫೆಬ್ರವರಿ, 2025

ಜಾಗತೀಕರಣ ವಾಣಿಜ್ಯ ಅಧ್ಯಯನ ಕ್ಷೇತ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ : ಪ್ರೊ. ಬಿ ಎಸ್ ನಾವಿ ಕಳವಳ.

ಬೆಳಗಾವಿ : ಜಾಗತೀಕರಣವು ವಾಣಿಜ್ಯ ಅಧ್ಯಯನ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭೌತಿಕ ಬುದ್ಧಿಮತ್ತೆ ಮತ್ತು ಇತರ ಹೊಸ ಅಧ್ಯಯನ ಕ್ಷೇತ್ರಗಳು ತೆರೆದುಕೊಳ್ಳುತ್ತಿದ್ದು, ಇದರಿಂದ ವಾಣಿಜ್ಯ ಅಧ್ಯಯನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮುಂಬರುವ ಪೀಳಿಗೆ ಈ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು ಮತ್ತು ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವಿದ್ಯಾಲಯದ ಬಿ ಎಸ್ ನಾವಿ ಅವರು ಕಳವಳ ವ್ಯಕತಪಡಿಸಿದ್ದಾರೆ. 



ಬೆಳಗಾವಿಯ ಮಹಾಂತ ಭವನದಲ್ಲಿ ಗುರುವಾರ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಮಹಾವಿದ್ಯಾಲಯ ಅಧ್ಯಾಪಕರ ಸಂಘವು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ, ಜಾಗತೀಕರಣದ ಪ್ರಭಾವ ಮತ್ತು ವಾಣಿಜ್ಯ ಅಧ್ಯಯನ ಕ್ಷೇತ್ರದ ಮೇಲಿನ ಪರಿಣಾಮಗಳ ಕುರಿತು ಪ್ರೊ. ಬಿ. ಎಸ್. ನಾವಿ ಮತ್ತು ಎಸ್. ಬಿ. ಆಕಾಶ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್. ಬಿ. ಆಕಾಶ ಅವರು, ಜಾಗತೀಕರಣವು ವಾಣಿಜ್ಯ ಅಧ್ಯಯನ ಕ್ಷೇತ್ರದಲ್ಲಿ ಆಕರ್ಷಕ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಈ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣವನ್ನು ನೀಡಲು ಅಧ್ಯಾಪಕರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.


ನಿವೃತ್ತ ಅಧ್ಯಾಪಕರಿಗೆ ಸನ್ಮಾನ ಮತ್ತು ಇತರ ಗೌರವಗಳು:



ಕಾರ್ಯಕ್ರಮದಲ್ಲಿ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧ್ಯಾಪಕರಿಗೆ ಸನ್ಮಾನಿಸಲಾಯಿತು. ಪಿಎಚ್‌ಡಿ ಪದವಿ ಪಡೆದ ಮತ್ತು ಕೆ-ಸೆಟ್/ನೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಧ್ಯಾಪಕರಿಗೂ ಗೌರವ ಸಲ್ಲಿಸಲಾಯಿತು.




19 ಫೆಬ್ರವರಿ, 2025

ವಾಣಿಜ್ಯ ಶಾಸ್ತ್ರದ ಅಧ್ಯಾಪಕರಾಗಿ ಕಾರ್ಯ ಮಾಡುತ್ತಿರುವವರ ಕೆಲಸ ಕಸಿದುಕೊಳ್ಳುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.

ಬೆಳಗಾವಿ : ಬಿಕಾಂ ವಿಷಯದ ಹಂಚಿಕೆ ಮತ್ತು ಬೋಧನೆಯಲ್ಲಿ ಉಂಟಾದ ಗೊಂದಲ ನಿವಾರಣೆಗೆ ಒತ್ತಾಯಿಸಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ  ಅಧ್ಯಾಪಕರ ಸಂಘದ ಪದಾಧಿಕಾರಿಗಳು ಬುಧವಾರ ಆರ್‌ಸಿಯು ಕುಲಸಚಿವ ಪ್ರೊ. ಸಂತೋಷ್ ಕಾಮಗೊಂಡ ಅವರಿಗೆ ವಿದ್ಯಾಸಂಗಮ ಆವರಣದಲ್ಲಿ ಮನವಿ ಸಲ್ಲಿಸಿದರು.


ಬಿಕಾಂ ಪದವಿಯಲ್ಲಿ ಮೊದಲ ಸೆಮಿಸ್ಟರ್ ಬೋಧಿಸಲಾಗುವ ಮಾರ್ಕೆಟ್ ಬಿಹೇವಿಯರ ಆ್ಯಂಡ್ ಬಿಜಿನೆಸ್ ಡಿಸಿಜನ್ ವಿಷಯವನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಪದವಿ ಕಾಲೇಜುಗಳಲ್ಲಿ ಬೋಧಿಸುತ್ತಿದ್ದಾರೆ. ಆದರೆ ಈ ವಿಷಯ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಮುಗಿಸಿರುವರು ಪ್ರಾಧ್ಯಪಕರಾಗಿ ಕಲಿಸುವುದು ಸೂಕ್ತ. ಆದರೆ ಈ ವಿಷಯವನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರಿಂದ ಬೋಧನೆ ಮಾಡಿಸುವ ಮೂಲಕ ವಾಣಿಜ್ಯ ಶಾಸ್ತ್ರ ಸಂತಕೋತ್ತರ ಪದವಿದರಾಗಿ ಅಧ್ಯಾಪಕರಿರುವವರಿಗೆ ಕೆಲಸ ದೊರೆಯುತ್ತಿಲ್ಲ ಮತ್ತು ಅನ್ಯಾಯವಾಗುತ್ತಿದೆ. ಆದ್ದರಿಂದ ಆರ್‌ಸಿಯು ವಾಣಿಜ್ಯ ಪದವಿ ವಿಷಯದಲ್ಲಿನ ಎಲ್ಲ ವಿಷಯಗಳನ್ನು ವಾಣಿಜ್ಯ ಶಾಸ್ತ್ರದಲ್ಲಿ ಪ್ರಾಧ್ಯಾಪಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ನೂರಾರು ಜನ ಶಿಕ್ಷಕರಿಂದ ಬೃಹತ ಹೋರಾಟ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರೊ. ಪಿ.ಎಲ್.ಹರಳೆ, ಉಪಾಧ್ಯಕ್ಷ ಪ್ರೊ.ಡಿ.ವೈ.ಕಾಂಬ್ಳೆ, ಕಾರ್ಯದರ್ಶಿ ಡಾ..ವಿವೇಕ ಮಾನೆ, ಪ್ರೊ. ಚಿದಾನಂದ ಶಿಂಗೆ, ಡಾ.ವಿದ್ಯಾ ಜಿರಗೆ, ಪ್ರೊ. ಅರುಣಾ ಸೂಜಿ, ಡಾ.  ಸಂಗೀತಾ ತೋಲಗಿ, ಪ್ರೊ. ಮಹಮ್ಮದ್ ಪಾಟೀಲ ನರ್ಕಾಚಿ ಹಾಗೂ ಇತರರು ಇದ್ದರು.